ಪುಂಡರೀಕಾಕ್ಷ ಉಪಾಧ್ಯಾಯರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ
ಲೇಖಕರು : ಜಗದೀಶ್ ಕಾರ೦ತ
ಮ೦ಗಳವಾರ, ನವ೦ಬರ್ 25 , 2014
|
ನವ೦ಬರ್ 25, 2014
|
ಪುಂಡರೀಕಾಕ್ಷ ಉಪಾಧ್ಯಾಯರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ
ಕೋಟ :
ಸರಕಾರದಿಂದ ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳು ನಿಜವಾಗಿ ವೃತ್ತಿ ಮೇಳಗಳಲ್ಲಿ ಕಾರ್ಯ ನಿರ್ವಹಿಸುವ ಕಲಾವಿದರಿಗೆ ಸಿಗದೆ, ಅನರ್ಹರ ಕೈ ಸೇರುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ್ ಕಾರಂತ ಹೇಳಿದರು.
ಅವರು ನ. 20ರಂದು ಸಾಲಿಗ್ರಾಮ ಗುರುನರಸಿಂಹ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟದಂದು ಜರುಗಿದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
|
ಪುಂಡರೀಕಾಕ್ಷ ಉಪಾಧ್ಯಾಯರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
|
ಮುಖ್ಯ ಅತಿಥಿ ರಾಜಶೇಖರ ಮರಕಿಣಿ ಮಾತನಾಡಿ, ಯಕ್ಷಗಾನ ಮೇಳಗಳು ಲಾಭ ನಷ್ಟದ ದೃಷ್ಟಿಯಿಂದ ನಡೆಯದೆ, ಕಲೆಯ ಅಭಿಮಾನದಿಂದ ನಡೆಯುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯ ಶೈಕ್ಷಣಿಕ ಹಾಗೂ ಭಾಷೆಯ ಬೆಳವಣಿಗೆಯಲ್ಲಿ ಯಕ್ಷಗಾನದ ಪಾತ್ರ ಪ್ರಮುಖ ಎಂದರು.
ಈ ಸಂದರ್ಭ ತೆಂಕು, ಬಡಗಿನ ಖ್ಯಾತ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾಧ್ಯಾಯರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಣಿಪಾಲ ಎಂ.ಐ.ಟಿ. ಉಪನ್ಯಾಸಕ ಎಸ್.ವಿ. ಉದಯ್ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಯು.ಆರ್. ಸಭಾಪತಿ, ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕೆ. ದೇವಿ ಪ್ರಸಾದ್ ಶೆಟ್ಟಿ, ಮೇಳದ ಯಜಮಾನ ಕಿಶನ್ ಹಗ್ಡೆ, ಮೆನೇಜರ್ ಪ್ರಸಾಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪರ್ತಕರ್ತ ರಾಮಕೃಷ್ಣ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ರಂಗದಲ್ಲಿಯೂ ಗಾಸೀಪ್ ಗಳಿವೆ : ಸಭಾಪತಿ
ಸಿನಿಮಾ ಕ್ಷೇತ್ರದ ಕುರಿತು ಅಭಿಮಾನಿಗಳಲ್ಲಿ ಗಾಸೀಪ್ ಗಳಿರುವಂತೆ ಯಕ್ಷಗಾನ ರಂಗದಲ್ಲಿಯೂ ಗಾಸೀಪ್ಗ್ಳಿಗೆ ಕಡಿಮೆಯಿಲ್ಲ. ಯಕ್ಷಗಾನ ಮೇಳದಲ್ಲಿ ಸಾಲಿಗ್ರಾಮ ಮೇಳ ಹಾಗೂ ಪೆರ್ಡೂರು ಮೇಳಗಳ ನಡುವೆ ವೈರುಧ್ಯಗಳಿವೆ ಎಂಬ ಗಾಸೀಪ್ಗ್ಳು ಅಭಿಮಾನಿ ವಲಯದಲ್ಲಿದೆ. ಆದರೆ ಇದು ಸುಳ್ಳು. ಈ ಎರಡು ಮೇಳಗಳು ಯಕ್ಷ ರಂಗದ ಮುಕುಟಗಳು. ಈ ಎರಡು ಮೇಳಗಳ ಯಜಮಾನರು ಹಾಗೂ ಕಲಾವಿದರ ನಡುವೆ ಉತ್ತಮ ಸಂಬಂಧಗಳಿವೆ ಎಂದು ಮಾಜಿ ಶಾಸಕ ಯು.ಆರ್. ಸಭಾಪತಿ ಹೇಳಿದರು.
ಕೃಪೆ :
http://www.udayavani.com
|
|
|